Saturday, 18 March 2017

 || ನಿನಗೆ ನಮನ ||
ಎಲ್ಲರನು ಸಾಕುತಿಹನು
ಎಲ್ಲರ ಹಸಿವನು ನಿಗಿಸುತಿಹನು.

ಭೂತಾಯಿ-ಮಳೆರಾಯರನ್ನು ನಂಬಿಹನು
ಹಲವು ಕಷ್ಟ-ನಷ್ಟಗಳನ್ನು ತನ್ನೆದೆಗೆ ಎಳೆದವನು
ಸಲಹುತಿಹನು ಈ ಜಗಕೆ ನೀಡುತ ಅನ್ನವನು
ಓ ಹೋ...ರೈತನೇ ನಿನಗೆ ನಮ್ಮ. ನಮನವು.||

ಮಣ್ಣಿನ ಉಳುಮೆಯ ಮಾಡುತಾ
ಬೀಜಗಳ ಬಿತ್ತನೆ ಮಾಡಿ..ಪೋಷಿಸುವಾತ...
ಒಕ್ಕಲು ಮಾಡಿ..ಎಲ್ಲರಿಗೂ ಹಂಚುತಾ...
ತನ್ನ ಔದಾಯ೯ ಭಾನೆತ್ತರ ಮೆರೆಯುತಾ..
ಕಾಲ ಬದಲಾದರು,
ಮುಖದೊಳು ಮಂದಹಾಸ ಬೀರುತಾ
ಓ ಹೋ...ರೈತನೇ ನಿನಗೆ ನಮ್ಮ. ನಮನವು.||
            ~ಗಮಯ(ಗಣೇಶ ಮ ಯಲಿಗಾರ )

Sunday, 12 March 2017

ಕಲ್ಪನಾಲೋಕ

 || ಕಲ್ಪನಾಲೋಕ ||

ಅಪರಿಚಿತ ಕನ್ಯೆಯ ಮೇಲೆ
ಸ್ವರಚಿತ ಕವನ....
ವಣಿ೯ಸಿ ಹೊಗಳಿದೆ ಅವಳ
ಅಂದ-ಚೆಂದವನು ಈ ಭೂಮಂಡಲದಲಿ 
ಇನ್ಯಾವ ವಸ್ತು ಅವಳಿಗೆ
ಸರಿಸಾಟಿಯಿಲ್ಲೆಂದು ಹೋಲಿಸಿ.||

ಅವಳದೆ ನೋಟವನ್ನು
ಮೈ ಮಾಟವನ್ನು 
ಸೃಷ್ಟಿಸಿದೆ ವಿಶದವಾಗಿ
ನಯನ ತಾರೆ,ತ್ರಿಪುರ ಸುಂದರಿ,
ನಾಟ್ಯ ಮಯೂರಿಯೆಂದೆಲ್ಲಾ.
ಅವಳಲ್ಲಿ ನನ್ನ ಸವ೯ಸ್ವವನ್ನಡಗಿಸಿ,
ಅವಳನ್ನೇ ನನ್ನ ಬಾಳಿನ ಬೆಳೆಕಾಗಿಸಿ.||

ಹಠಮಾರಿ ಹೆಣ್ಣಿನ
ಮುಗ್ಧ ಚಿತ್ರಣ
ಬಿಡಿಸಿದೆ ಬಿಳಿ ಹಾಳೆಯ ಮೇಲೆ
ಕರಿ ಕುಂಚದಿ ಕಣ್ಣರೆಪ್ಪೆಯ ಮೇಲೆ
ಸವರಿದೆ ಇನ್ನಷ್ಟು ಮುಗ್ಧತೆಯನು
ಬಿಂಬಿಸಲು,ವಿವರವಾಗಿ ತೋರಿಸಲು.
ನೈಜ ಮುಖದ ಹಠತನ
ಮತ್ತೆ ತೋರಿತು ಸಹಜತನ.||

ಕಲ್ಪನಾಲೋಕದಲಿ ಮುಳುಗಿ
ನಾ ಹೋದೆ ಕರಗಿ 
ನೀ ನೋಡದೆ ತಿರುಗಿ.
ಹೃದಯ ತಡಬಡಿಸುತ್ತಿದೆ ಮರುಗಿ
ತವಕದಿಂದ ಕಾಯುತ್ತಿದೆ ನಿನಗಾಗಿ
ಬರುವೆಯಾ.? 
ನನ್ನ ಬಳಿಗೆ,ಈ ಘಳಿಗೆ.||

          ~ಗಮಯ(ಗಣೇಶ ಮ.ಯಲಿಗಾರ)