Saturday, 18 March 2017

 || ನಿನಗೆ ನಮನ ||
ಎಲ್ಲರನು ಸಾಕುತಿಹನು
ಎಲ್ಲರ ಹಸಿವನು ನಿಗಿಸುತಿಹನು.

ಭೂತಾಯಿ-ಮಳೆರಾಯರನ್ನು ನಂಬಿಹನು
ಹಲವು ಕಷ್ಟ-ನಷ್ಟಗಳನ್ನು ತನ್ನೆದೆಗೆ ಎಳೆದವನು
ಸಲಹುತಿಹನು ಈ ಜಗಕೆ ನೀಡುತ ಅನ್ನವನು
ಓ ಹೋ...ರೈತನೇ ನಿನಗೆ ನಮ್ಮ. ನಮನವು.||

ಮಣ್ಣಿನ ಉಳುಮೆಯ ಮಾಡುತಾ
ಬೀಜಗಳ ಬಿತ್ತನೆ ಮಾಡಿ..ಪೋಷಿಸುವಾತ...
ಒಕ್ಕಲು ಮಾಡಿ..ಎಲ್ಲರಿಗೂ ಹಂಚುತಾ...
ತನ್ನ ಔದಾಯ೯ ಭಾನೆತ್ತರ ಮೆರೆಯುತಾ..
ಕಾಲ ಬದಲಾದರು,
ಮುಖದೊಳು ಮಂದಹಾಸ ಬೀರುತಾ
ಓ ಹೋ...ರೈತನೇ ನಿನಗೆ ನಮ್ಮ. ನಮನವು.||
            ~ಗಮಯ(ಗಣೇಶ ಮ ಯಲಿಗಾರ )

No comments:

Post a Comment